ಸಹ್ಯಾದ್ರಿ ಸುದ್ದಿ
ಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ತಲಕಾವೇರಿಯಲ್ಲಿ ತೀರ್ಥೋದ್ಭವ: ತೀರ್ಥರೂಪಿಣಿಯಾಗಿ ದರ್ಶನ ಕಾವೇರಿ

ಕೊಡಗು: ಕೊಡಗಿನ ಭಾಗಮಂಡಲದ ತಲಕಾವೇರಿಯಲ್ಲಿ ಇಂದು ಪವಿತ್ರ ತೀರ್ಥೋದ್ಭವವಾಗಿದ್ದು ನಾಡಿನ ಜೀವದಾತೆ ಕಾವೇರಿ ತೀರ್ಥರೂಪಿಣಿಯಾಗಿ ಉಕ್ಕಿಬಂದು ಭಕ್ತರಿಗೆ ದರ್ಶನ ನೀಡಿದ್ದಾಳೆ.

ಕಾವೇರಿ ಉಗಮಸ್ಥಾನ  ತಲಕಾವೇರಿ ಉಕ್ಕಿಬಂದ ಕಾವೇರಿ ಮಾತೆಯನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡಿದ್ದಾರೆ. ತುಲ ಲಗ್ನದಲ್ಲಿ 7.40 ನಿಮಿಷಕ್ಕೆ ಕಾವೇರಿ ಉಕ್ಕಿ ಬಂದಿದ್ದು, ಕೊಡವರು ಕೊಡವ ಸಾಂಪ್ರದಾಯಿಕ  ಉಡುಗೆ ತೊಟ್ಟು ದೀಪ ಹಿಡಿದು ಕಾವೇರಿಗೆ ಪೂಜೆ ಸಲ್ಲಿಸಿದರು.

ಜೈ ಜೈ ಮಾತೆ ಕಾವೇರಿ ಮಾತೆ ಜೈಕಾರದ ಹರ್ಷೋದ್ಘಾರದ ನಡುವೆ ಬ್ರಹ್ಮಕುಂಡಿಕೆಯಿಂದ ಕಾವೇರಿ ಹರಿದು ಬಂದಿದ್ದು  ಭಕ್ತರು ತೀರ್ಥ ಕೊಳದಲ್ಲಿ ಸ್ನಾನ ಮಾಡಿ ಪುನೀತರಾದರು.

Related posts

ಯಕೃತ್ ಕ್ಯಾನ್ಸರ್ನಿಂದ ಬಳಲುತ್ತಿದ್ದ ತಾಯಿಗೆ ಯಕೃತ್ ದಾನ ಮಾಡಿ ಜೀವ ಉಳಿಸಿದ ಮಗ

Editor

ಬಿಜೆಪಿಯಿಂದ ‘ಭೀಮ ಹೆಜ್ಜೆ’ ಅಭಿಯಾನ: ವಿಧಾನಸೌಧದಲ್ಲಿ ಚಾಲನೆ

Editor

ಸೆ.23 ರಂದು ಮಂಡ್ಯ ಜಿಲ್ಲಾ ಬಂದ್ ಗೆ ಕರೆ.

Editor