ಸಹ್ಯಾದ್ರಿ ಸುದ್ದಿ
ಆರೋಗ್ಯಪ್ರಧಾನ ಸುದ್ದಿಮುಖ್ಯಾಂಶಗಳುರಾಜ್ಯ

ಮಾತ್ರೆಗಳಿಲ್ಲದೆ ತಲೆನೋವು ಕಡಿಮೆ ಮಾಡಲು ಸಿಂಪಲ್ ಟಿಪ್ಸ್ ಅನುಸರಿಸಿ

ಬೆಂಗಳೂರು: ಕೆಲಸ ಮಾಡುವ ಎಲ್ಲರಿಗೂ ತಲೆನೋವು ಬಂದೇ ಬರುತ್ತದೆ.  ತಲೆನೋವು ಸಣ್ಣ ಸಮಸ್ಯೆಯಂತೆ ಕಂಡರೂ ಒಮ್ಮೆ ಬಂದರೆ ದಿನವಿಡೀ ಸಾಕಷ್ಟು ಕಿರಿಕಿರಿಯನ್ನುಂಟು ಮಾಡುತ್ತದೆ. ಸಾಮಾನ್ಯವಾಗಿ ನಮ್ಮ ಜೀವನಶೈಲಿ, ಒತ್ತಡ, ಕಳಪೆ ನಿದ್ರೆ, ದೀರ್ಘಕಾಲದ ವರೆಗೆ ಮೊಬೈಲ್ ಅಥವಾ ಟಿವಿ ನೋಡುವುದು, ಹಸಿವಾದಾಗ ಸರಿಯಾಗಿ ತಿನ್ನದಿರುವುದು ಮುಂತಾದ ಅಂಶಗಳು ತಲೆನೋವಿಗೆ ಕಾರಣವಾಗಿರಬಹುದು.

ಪದೇ ಪದೇ ಬರುವ ತಲೆ ನೋವಿನಿಂದ ಮುಕ್ತಿ ಪಡೆಯಲು ಬಹುತೇಕ ಮಂದಿ ಮಾತ್ರೆಗಳ ಮೊರೆ ಹೋಗುತ್ತಾರೆ. ಆದರೆ ಇದು ಸರಿಯಲ್ಲ, ಅದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದಲ್ಲ.  ತಲೆನೋವು ಬರದಂತೆ ಕಾಪಾಡಿಕೊಳ್ಳಬೇಕು ಅಥವಾ ಬಂದಾಗ ಮನೆ ಮದ್ದಿನಿಂದಲೇ ಅದನ್ನು ಕಡಿಮೆ ಮಾಡಿಕೊಂಡು ಮಾತ್ರೆ ಬಳಕೆಯನ್ನು ಕಡಿಮೆ ಮಾಡಬೇಕು. ಹಾಗಾದರೆ ನೈಸರ್ಗಿಕ ರೀತಿಯಲ್ಲಿ ತಲೆನೋವನ್ನು ಕಡಿಮೆ ಮಾಡುವುದು ಹೇಗೆ?  ಇಲ್ಲಿದೆ ನೋಡಿ ಮಾಹಿತಿ

ತಲೆನೋವು ಬಂದಾಗ, ತಕ್ಷಣ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ಬಿಟ್ಟು ಮನೆಯಲ್ಲಿಯೇ ನೈಸರ್ಗಿಕ ಚಿಕಿತ್ಸೆಯನ್ನು ಪ್ರಯತ್ನಿಸಬಹುದು. ಎರಡು ಐಸ್ ಕ್ಯೂಬ್ ಗಳನ್ನು ತೆಗೆದುಕೊಂಡು ಅವುಗಳನ್ನು ಸಣ್ಣ ತಟ್ಟೆ ಅಥವಾ ದೊಡ್ಡ ಬೌಲ್ ನಲ್ಲಿ ಹಾಕಿ. ಅದರ ನಂತರ, ನಿಮ್ಮ ಬೆರಳುಗಳನ್ನು ಈ ಐಸ್ ಕ್ಯೂಬ್ ಗಳ ಮೇಲೆ ಇರಿಸಿ, ಸ್ವಲ್ಪ ಸಮಯದ ನಂತರ, ಅದನ್ನು ತೆಗೆದು ನಿಧಾನವಾಗಿ ಮಸಾಜ್ ಮಾಡಿ. ಇದನ್ನು ಎರಡು ನಿಮಿಷಗಳ ಕಾಲ ಮಾಡಿದರೆ ತಲೆನೋವು ಕಡಿಮೆಯಾಗುತ್ತದೆ. ಈ ಮನೆಮದ್ದನ್ನು ಕೇಳಿ ನಿಮಗೆ ಸ್ವಲ್ಪ ಆಶ್ಚರ್ಯ ಎನಿಸಿದರೂ ಇದು ನಿಮ್ಮ ತೆಲೆನೋವನ್ನು ಕಡಿಮೆ ಮಾಡುವುದರಲ್ಲಿ ಸಂಶಯವಿಲ್ಲ.

ನಮ್ಮ ಬೆರಳುಗಳ ನರಗಳು ನೇರವಾಗಿ ತಲೆಯ ನರಗಳಿಗೆ ಸಂಪರ್ಕ ಹೊಂದಿವೆ. ಮಂಜುಗಡ್ಡೆ ಅಥವಾ ಐಸ್ ಕ್ಯೂಬ್ ತಂಪು ಮಾಡುವುದರಿಂದ, ನರಗಳ ಒತ್ತಡ ಕಡಿಮೆಯಾಗುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ತಲೆನೋವು ಕಡಿಮೆಯಾಗುವ ಸಾಧ್ಯತೆಯಿದೆ. ಇದು ಸಂಪೂರ್ಣವಾಗಿ ನೈಸರ್ಗಿಕ ಚಿಕಿತ್ಸೆಯಾಗಿರುವುದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲ. ಈ ಮನೆಮದ್ದಿಗೆ ಐಸ್ ವಾಟರ್ ಗಳನ್ನೂ ಕೂಡ ಬಳಕೆ ಮಾಡಿಕೊಳ್ಳಬಹುದು. ಇದರ ಹೊರತಾಗಿ ಇತರ ನೈಸರ್ಗಿಕ ವಿಧಾನಗಳ ಬಗ್ಗೆ ಮಾಹಿತಿ ಇಲ್ಲಿದೆ.

*ಸಾಕಷ್ಟು ನೀರು ಕುಡಿಯಿರಿ; ಸಾಮಾನ್ಯವಾಗಿ ನಿರ್ಜಲೀಕರಣ ತಲೆನೋವಿಗೆ ಕಾರಣವಾಗಬಹುದು. ಹಾಗಾಗಿ ಸರಿಯಾಗಿ ನೀರು ಕುಡಿಯಿರಿ.

*ನಿಧಾನವಾಗಿ ಉಸಿರಾಡುವುದು; ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ತಲೆನೋವನ್ನು ಕಡಿಮೆ ಮಾಡುತ್ತದೆ.

*ಸ್ವಲ್ಪ ಯೋಗ ಮತ್ತು ಮಸಾಜ್; ಕುತ್ತಿಗೆ ಮತ್ತು ತಲೆಯ ಪ್ರದೇಶಗಳನ್ನು ನಿಧಾನವಾಗಿ ಮಸಾಜ್ ಮಾಡುವುದರಿಂದ ಪರಿಹಾರ ಸಿಗುತ್ತದೆ.

*ಪುದೀನಾ ಅಥವಾ ಶುಂಠಿ ಚಹಾ; ಈ ಚಹಾ ನೈಸರ್ಗಿಕ ನೋವು ನಿವಾರಣೆಗೆ ಬಹಳ ಉಪಯುಕ್ತವಾಗಿವೆ.

ಈ ಸಲಹೆಗಳನ್ನು ಅನುಸರಿಸುವುದರಿಂದ ತಲೆನೋವನ್ನು ಸುಲಭವಾಗಿ ಕಡಿಮೆ ಮಾಡಬಹುದು. ನಿಮಗೆ ತಲೆನೋವು ಬಂದಾಗ ಒಮ್ಮೆ ಐಸ್ ಮಸಾಜ್ ಪ್ರಯತ್ನಿಸುವುದನ್ನು ಮಾತ್ರ ಮರೆಯಬೇಡಿ.

 

Related posts

ಕಷ್ಟಗಳನ್ನು ಅರಗಿಸಿಕೊಂಡು ಪರಿಪಕ್ವವಾದವರು ಆರ್.ಎಂ ಮಂಜುನಾಥ ಗೌಡರು-ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ನುಡಿ

Editor

ಅಂಗಾಂಗ ದಾನ ಮಾಡುವ ನೌಕರರಿಗೆ 42 ದಿನ ವಿಶೇಷ ಸಾಂದರ್ಭಿಕ ರಜೆ ಘೋಷಣೆ

Editor

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನ ಆಗಿ ಇಂದಿಗೆ ಒಂದು ವರ್ಷ

Editor