ಸಹ್ಯಾದ್ರಿ ಸುದ್ದಿ
ಆರೋಗ್ಯಕ್ರೀಡೆದೇಶಪ್ರಧಾನ ಸುದ್ದಿಮುಖ್ಯಾಂಶಗಳು

ಆಟದ ಮಧ್ಯೆ ಕ್ರೀಡಾಪಟುಗಳು ಹೆಚ್ಚಾಗಿ ಬಾಳೆಹಣ್ಣುಗಳನ್ನು ಸೇವಿಸುತ್ತಾರೆ ಏಕೆ ಗೊತ್ತೆ..? ಕಾರಣವಿಷ್ಟೆ

ಬೆಂಗಳೂರು: ದಿನನಿತ್ಯ ಊಟದ ನಂತರ ಬಾಳೆಹಣ್ಣನ್ನು ಸಾಮಾನ್ಯವಾಗಿ ಪ್ರತಿನಿತ್ಯ ಸೇವನೆ ಮಾಡುತ್ತೇವೆ.  ಬಾಳೆ ಹಣ್ಣಿನ ಸೇವನೆಯಿಂದ ದೇಹಕ್ಕೆ ಎನರ್ಜಿ ಬರುತ್ತದೆ. ಹೀಗಾಗಿ ಹೊಟ್ಟೆ ಹಸಿವಿದ್ದಾಗಲೂ ಹೆಚ್ಚಾಗಿ ಬಾಳೆ ಹಣ್ಣನ್ನ ಸೇವಿಸುತ್ತೇವೆ. ಈ ಮಧ್ಯ ಕ್ರಿಕೆಟ್ ಪುಟ್ಬಾಲ್ ಆಡುವ ಕ್ರೀಡಾಪಟುಗಳು ಮಧ್ಯೆ ಮಧ್ಯೆ ಹೆಚ್ಚಾಗಿ ಬಾಳೆಹಣ್ಣನ್ನ ಸೇವನೆ ಮಾಡುತ್ತಾರೆ. ಇದಕ್ಕೆ ಕಾರಣವೇನು ಎಂಬುದನ್ನ ತಿಳಿಯೋಣ ಬನ್ನಿ.

ಕ್ರೀಡೆ ಗಳಲ್ಲಿ ಭಾಗವಹಿಸುವವರು ಹೆಚ್ಚಾಗಿ ಬಾಳೆಹಣ್ಣುಗಳನ್ನು ತಿನ್ನುವುದನ್ನು ನಾವು ನೋಡುತ್ತಲೇ ಇರುತ್ತೇವೆ. ಆದರೆ ಆಟದ ಮಧ್ಯದಲ್ಲಿ ಬಾಳೆಹಣ್ಣುಗಳನ್ನು ಏಕೆ ತಿನ್ನುತ್ತಾರೆ? ಇದರಿಂದ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ ಎಂಬ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ

ಕ್ರೀಡೆಯಲ್ಲಿ ಭಾಗವಹಿಸುವವರಿಗೆ ದೈಹಿಕ ಶಕ್ತಿಯ ಅಗತ್ಯತೆ ಹೆಚ್ಚಾಗಿ ಇರುತ್ತದೆ. ಏಕಂದರೆ ನಿರಂತರವಾಗಿ ಓಡುವುದು, ಆಟ ಮುಗಿಯುವವರೆಗೂ ಒಂದೇ ರೀತಿಯ ಉತ್ಸಾಹ ಕಾಪಾಡಿಕೊಳ್ಳಲು, ದೇಹದಲ್ಲಿನ ಶಕ್ತಿಯನ್ನು ತ್ವರಿತವಾಗಿ ಹೊರಹಾಕಬೇಕಾಗುತ್ತದೆ. ಆದ ಕಾರಣ, ಆಟಗಾರರು ಆವೇಗವನ್ನು ಕೊನೆತನಕ ಉಳಿಸಿಕೊಳ್ಳಲು ನೈಸರ್ಗಿಕ ಶಕ್ತಿಯ ಮೂಲವಾಗಿರುವ ಬಾಳೆಹಣ್ಣುಗಳ ಸೇವನೆ ಮಾಡುತ್ತಾರೆ. ಇದರಲ್ಲಿರುವ ಕಾರ್ಬೋಹೈಡ್ರೇಟ್ ಗಳು ಬಹಳ ಬೇಗನೆ ಜೀರ್ಣವಾಗಿ ತಕ್ಷಣದ ಶಕ್ತಿಯನ್ನು ಒದಗಿಸುವುದರಿಂದ ಆಟಗಾರರು ಇದನ್ನು ಸೇವನೆ ಮಾಡುತ್ತಾರೆ.

ಆಟವಾಡುವ ಸಮಯದಲ್ಲಿ ಸಾಕಷ್ಟು ಶಕ್ತಿ ವ್ಯಯವಾಗುವುದರಿಂದ ಆಟಗಾರರಲ್ಲಿ ಜೀರ್ಣಕ್ರಿಯೆ ಬಲವಾಗಿರಬೇಕಾಗುತ್ತದೆ. ಆಗ ಮಲಬದ್ಧತೆ ಸಮಸ್ಯೆ ಬರುವುದಿಲ್ಲ. ಜೊತೆಗೆ ದೇಹವೂ ಕೂಡ ಹಗುರವಾಗುತ್ತದೆ. ಈ ರೀತಿಯ ಆರೋಗ್ಯಕರ ಗುಣಗಳು ಬಾಳೆಹಣ್ಣಿನಲ್ಲಿರುವುದರಿಂದ ಇದರ ಆಯ್ಕೆ ಬಹಳ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ ಆದಲ್ಲದೆ ಇದರಲ್ಲಿರುವ ಫೈಬರ್ ಅಂಶವು ಜೀರ್ಣಕ್ರಿಯೆಯನ್ನು ಸುಧಾರಿಸುವ ಗುಣಗಳನ್ನು ಹೊಂದಿದೆ.

ಪದೇ ಪದೇ ಎನರ್ಜಿ ಡ್ರಿಂಕ್ಸ್ ಕುಡಿಯುವುದಕ್ಕಿಂತ ಬಾಳೆಹಣ್ಣಿನ ಸೇವನೆ ಮಾಡುವುದು ತುಂಬಾ ಆರೋಗ್ಯಕರ. ಏಕೆಂದರೆ ಇದು ಗ್ಲೂಕೋಸ್, ಫ್ರಕ್ಟೋಸ್, ಸುಕ್ರೋಸ್ ಮತ್ತು ಮಾಲ್ಟೋಸ್ ಗಳನ್ನು ಹೊಂದಿರುತ್ತದೆ. ಅವು ದೇಹಕ್ಕೆ ತಕ್ಷಣದ ಶಕ್ತಿಯನ್ನು ಒದಗಿಸುತ್ತವೆ. ಅಲ್ಲದೆ ಉತ್ತಮ ಪೋಷಕಾಂಶಗಳು ಮತ್ತು ನೈಸರ್ಗಿಕ ಸಕ್ಕರೆಗಳ ಮಿಶ್ರಣವನ್ನು ಹೊಂದಿರುವ ಬಾಳೆಹಣ್ಣು ನಿಧಾನವಾಗಿ ದೇಹಕ್ಕೆ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಆಟಗಾರರಿಗೆ ದೀರ್ಘಕಾಲದ ವರೆಗೂ ಆಯಾಸದ ಅನುಭವ ಆಗುವುದಿಲ್ಲ.

ಆಟವಾಡುವಾಗ ದೇಹದ ಮೇಲೆ ಹೆಚ್ಚು ಶ್ರಮ ಬೀಳುವುದರಿಂದ ಬೆವರು ಹೆಚ್ಚಾಗಿ ಕಂಡುಬರುತ್ತದೆ. ಹಾಗಾಗಿ ಸೋಡಿಯಂ ಮತ್ತು ಪೊಟ್ಯಾಸಿಯಮ್ ನಂತಹ ಪ್ರಮುಖ ಎಲೆಕ್ಟ್ರೋಲೈಟ್ ಗಳು ಬೆವರುವಿಕೆಯ ಮೂಲಕ ಹೊರಹಾಕಲ್ಪಡುತ್ತವೆ. ಇದು ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು. ಇದನ್ನು ತಡೆಯಲು ಬಾಳೆಹಣ್ಣಿನ ಸೇವನೆ ಮಾಡಬೇಕು. ಏಕೆಂದರೆ ಈ ಹಣ್ಣಿಯಲ್ಲಿರುವ ಪೊಟ್ಯಾಸಿಯಮ್ ದೇಹಕ್ಕೆ ಅಗತ್ಯವಿರುವ ಎಲೆಕ್ಟ್ರೋಲೈಟ್ಗಳನ್ನು ಮರುಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

ಆಟಗಾರರು ಬೆವರಿದಾಗ ದೇಹದಲ್ಲಿನ ನೀರು ಕಡಿಮೆಯಾಗುತ್ತದೆ. ಬಾಳೆಹಣ್ಣಿನಲ್ಲಿ ನೀರು ಮತ್ತು ಪೋಷಕಾಂಶಗಳು ಸಮೃದ್ಧವಾಗಿದ್ದು, ಇದು ಹೈಡ್ರೇಟ್ ಆಗಿ ಉಳಿಯಲು ಸಹಾಯ ಮಾಡುತ್ತದೆ. ಅಲ್ಲದೆ, ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಇದು ಸ್ನಾಯುಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಸಹ ಒದಗಿಸುತ್ತದೆ.

ಕ್ರೀಡೆಯಲ್ಲಿ ಒತ್ತಡ ಸಹಜ. ಸಾಮಾನ್ಯವಾಗಿ ಗೆಲ್ಲುವ ಭಯ ಒತ್ತಡವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಇಂತಹ ಸಮಯದಲ್ಲಿ ಬಾಳೆಹಣ್ಣಿನಲ್ಲಿರುವ ಟ್ರಿಪ್ಟೋಫಾನ್ ಎಂಬ ಅಮೈನೋ ಆಮ್ಲವು ದೇಹದಲ್ಲಿ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಮನಸ್ಸಿಗೆ ಶಾಂತಿಯನ್ನು ಒದಗಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

 

Related posts

ಶಿವಮೊಗ್ಗ ದಸರಾದಲ್ಲಿ ಅಪ್ಪ ಮಗಳು ಅಡುಗೆ ಮಾಡುವ ಸ್ಪರ್ಧೆ: ಉಪಮೇಯರ್ ಅವರ ಪುತ್ರಿ ಭಾಗಿ.

Editor

ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ ಪ್ರಶ್ನಿಸಿ ಅರ್ಜಿ ವಿಚಾರಣೆ ಆ.31ಕ್ಕೆ ಮುಂದೂಡಿಕೆ

Editor

ಆಶಾ ಕಾರ್ಯಕರ್ತೆಯರು ಮನಸು ಮಾಡಿದರೆ ಸಕ್ಕರೆ ಕಾಯಿಲೆ ಬಗೆಗೂ ಜನರಲ್ಲಿ ದೊಡ್ಡ ಜಾಗೃತಿ ಮೂಡಿಸಲು ಸಾಧ್ಯ- ಎಸ್ ಪಿ ಮಿಥುನ್ ಕುಮಾರ್

Editor